Welcome to My World of Words!!!

Pages

Thursday, July 8, 2010

ಆಷಾಡದ ಬಿಸಿಲು ..!!!


ಆಷಾಡದ ಬಿಸಿಲು ..!!!


ಪ್ರಿಯ ಓದುಗರೇ… ಮಲೆನಾಡಿನ ಮಳೆಯ ತಂಪನ್ನು ಅಹ್ಲಾದಿಸುತ್ತಿರುವ ಮಲೆನಾಡಿನ ಸಮೃದ್ಧ ಜನತೆಯೇ , ಮಳೆಯನ್ನೂ ಕಂಡು ಹೊಸ ಹೊಸ ಪ್ರೀಮ ಪತ್ರ ಕವನಗಳನ್ನ ಬರಿಯುತ್ತಿರುವ ಪ್ರೇಮಿಗಳೇ , ಮಳೆಯ ವಿವಿಧ ರೂಪಗಳನ್ನ ತಮ್ಮ ಜೀವನದ ವಿವಿಧ ಹಂತಗಳಿಗೆ ಹೋಲಿಸಿ ರಸಮಯ ಲೇಖನಗಳನ್ನು ಹೊರಹಾಕುವ ಬರಹಗಾರರೆ, ಮಳೆಯ ಮೇಲೆ ಚಲನ ಚಿತ್ರಗಳನ್ನ ರೂಪಿಸುವ ಚಿತ್ರೋದ್ಯಮದವರೇ …ಮಳೆಯ ರಭಸಕ್ಕೆ ವಿಚಲಿತಗೊಂಡ ಆಫೀಸಿಗೆ ಹೋಗಲು ವದ್ದಾಡುತ್ತಿರುವ tension ಪ್ರಾಣಿಗಳೇ , ಮಳೆಯಿಂದಾಗಿ ಕೆಲಸ ನಿಂತಿದೆಯಂದು ತಲೆ ಕೆಡಿಸಿಕೊಂಡು ಕೂತಿರುವ ಕಾಮಗಾರಿ ಕಾರ್ಮಿಕರೆ…… ಎಲ್ಲರು ಮಳೆಯ ಬಗ್ಗೆ ಚಿತ್ರ ವಿಚಿತ್ರ ಅನುಭವವನ್ನ ಹಂಚಿಕೊಂಡಿದ್ದಾರೆ. ನಾನು ಸಹ ಇಲ್ಲಿ ಮಳೆಯ ಬಗ್ಗೆ ಒಂದು ಬ್ಲಾಗ್ ಬರಿಯುವ ಅಂತನೆ ಕೂತೆ. ಆದರೆ ಇಲ್ಲಿಯ ಶೆಕೆಗೆ ನನ್ನ ಆಲೋಚನೆಗಳೆಲ್ಲ ಬತ್ತಿ ಹೋಗಿದ್ದವು. ನನ್ ಮಗಂದು ಪೆನ್ನಲ್ಲಿ ಶಾಹಿ ಕೂಡ ಬರಿದಾಯಿತು. ಕಾರಣ ಇಲ್ಲಿಯ ಧಗೆ. ಅದಕ್ಕೆ ಈ ಆಷಾಡದ ವಿವಿಧ ಬಣ್ಣಗಳನ್ನ ನಿಮ್ಮ ಮುಂದೆ ಇಡಲು ನಿರ್ಧರಿಸಿದೆ .. J

ಹಹ….. ಒಮಾನ್ ದೇಶ ,………..ಇಲ್ಲಿ ನನ್ನ ವಾಸ… ಈಗ ಇಲ್ಲಿ ಆಷಾಡದ ಚುರುಕು ಆಗಲೇ ಮುಟ್ಟಿದಂತಿದೆ
೩೬೦ ಡಿಗ್ರೀಯಲ್ಲೂ ಮರಳು ೩೬೫ ದಿನಗಳ ಮೈ ನರವೆಳಿಸುವ ತಾಪ….ರಸ್ತೆಯ
ಎಡ ಬಲಕ್ಕೆ ಎದ್ದು ನಿಂತ ಖರ್ಜೂರದ ಮರಗಳು . ಹಮ್… ಇನ್ನು ಇಲ್ಲಿಯ ಬಿಸಿಲು… ಅಬ್ಬಾ..ಚಿಕ್ಕಂದಿನಿಂದ ದೂರದರ್ಶನದಲ್ಲಿ ನೋಡುತ್ತಿದ್ದೆ..೪೦ ಡಿಗ್ರೀ …೪೫ ಡಿಗ್ರೀ ಎಂದು… ಅದೂ ದೂರ ದೆಹಲಿಯಲ್ಲಿ ….ಆದರೆ ನಾನಿದ್ದ ಪ್ರದೇಶದಲ್ಲಿ ೩೦ ರಿಂದ ಅತೀ ಹೆಚ್ಚು ಅಂದರೆ ೩೫ರ ತನಕ ಅಸ್ಟೆ ಕಂಡಿದ್ದೆ. ಆದರೆ ಇಲ್ಲಿ ಚಳಿಗಾಲದಲ್ಲೂ ೩೦ ತಕ್ಕಿಂತ ಹೆಚ್ಚೇ ಸಿಗುವುದು. ಬೇಸಿಗೆಯಲ್ಲಂತೂ ಕೇಳುವುದೇ ಬೇಡ . ಬೇಸಿಗೆಯಲ್ಲಿ ತಾಪಮಾನ ಮೊದಲ ದರ್ಜೆಯಲ್ಲಿ ತೆಲ್ಗದೆಯಾಗುತ್ತದೆ ಈ ದೇಶದಲ್ಲಿ. ಅಂದರೆ ಗರಿಷ್ಠ ೬೦ ಮುಟ್ಟಿದರೂ…ಆಚರಿಯೇನು ಇಲ್ಲ . ಈಗಾಗಲೇ ೫೭ ಮುಟ್ಟಿ ತನ್ನ ಪ್ರಖರತೆಯನ್ನ ತೋರಿಸಿ ಆಗಿದೆ.

ಬೆಳಗಿನ ಜಾವ ೪.೩೦ಕ್ಕೆಲ್ಲ ಬೆಳಗಾಗಿ ಬಿಡುತ್ತದೆ. ಸಂಜೆ ೭.೩೦ ಆದರೂ ಕತ್ತಲು ಆವರಿಸುವುದಿಲ್ಲ. ಇದು ಇಲ್ಲಿನ ಬೇಸಿಗೆಯ ದಿನನಿತ್ಯದ ಕಥೆ. ಈ ಜರ್ಜರಿಸುವ ಬಿಸಿಲಿನ ತಾಪದಲ್ಲಿ ಕೆಲಸ ಮಾಡುವರ ಆ ಬಡಪಾಯಿ ಕಾರ್ಮಿಕರ ಕಥೆ ಹೇಳ ತೀರದು. ಬೆಳಿಗ್ಗೆ ೬ ರಿಂದ ಕೆಲಸ ಆರಂಬವಾಗುತ್ತದೆ. 8 ಘಂಟೆಗೆಲ್ಲ ತಮ್ಮ ವಸ್ತ್ರಗಳಲ್ಲಿ ಪೂರ್ಣವಾಗಿ ಮಿಂದಿರುತ್ತಾರೆ. ಅತೀವ ಕಷ್ಟ ಪಡುವ ಈ ಜನ..ದಿನದ ಅಂತ್ಯಕ್ಕೆ ಮನೆಗೆ ಹೋಗಲು ಕೂಡ ಪರದಾಡಬೇಕಾಗುತ್ತದೆ. ತಮ್ಮ ವಸತಿಯಲ್ಲಾದರು ಸುಖವಿದಿಯೇ??? ಅದೂ ಇಲ್ಲ… ಬೆಳಗಿನ ಜಾವ ೩.೩೦ಕ್ಕೆಲ್ಲ ಎದ್ದು ಬೆಳಗಿನ ದಿನನಿತ್ಯದ ಕಾರ್ಯಗಳನ್ನ ಮುಗಿಸಿ ಕೆಲಸಕ್ಕೆ ಹೊರಡಲು ತಯಾರಾಗುತ್ತಾರೆ. ಕಾರಣ ಅಲ್ಲಿ ನಿರ್ಮಿಸಲಾದ ವಸತಿಯ ವ್ಯವಸ್ತೆ ಹಾಗಿರುತ್ತದೆ. ೩೦೦ ಜನರಿಗೆ 6 ಶೌಚಾಲಯ ಹಾಗು ೬ ಸ್ನಾನಗೃಹ. ಯಾವ ಲೆಕ್ಕದಲ್ಲಿ ನಿರ್ಮಿಸಿದ್ದರೂ ದೇವರಿಗೇ ಗೊತ್ತು.

ಹಮ್ ಇದು ಕಾರ್ಮಿಕರ ಗೋಳಾದರೆ ಆಫೀಸಿನಲ್ಲಿ ಕೆಲಸ ಮಾಡುವವರ ಕಥೆ ಬೇರೆ. ಕೂತಲ್ಲಿಯೀ ಬೆವರು . ಇದು ಒಂತರ sweat therapy ಇದ್ದಂತೆ. ಕೊಬ್ಬು ಕರಗಿಸಲು ಒಳ್ಳೆಯ ಸುಲಭ ಮಾರ್ಗ . ಹೊರ ಬಿದ್ದರೆ ೧೦ ನಿಮಿಷದಲ್ಲಿ ಸುಟ್ಟು ಕರಕಲಾಗಳು ೨ ಮಾತಿಲ್ಲ. Ac ಇದ್ದರೂ…ಈ ತಾಪಮಾನಕ್ಕೆ ಅವುಗಳು ಕೂಡ ತಮ್ಮ ಕಾರ್ಯವನ್ನ ಸ್ಥಗಿತಗೊಲ್ಲಿಸಿ ಬಿಡುತ್ತವೆ…!!! ಹಹ…ಒಂದು ಹುಚ್ಚು ಆಲೋಚನೆ ನನ್ನ ತಲೆಗೂ ಕೂಡ ಬಂತು. ಹೇಗಿದ್ದರೂ ಇಲ್ಲಿ ತನಕ ಬಂದಾಗಿದೆ . ಸ್ವಲ್ಪ ಪ್ರಯತ್ನ ಪಟ್ಟರೆ ಒಂದು ವಾರದಲ್ಲಿ ಸ್ವಲ್ಪ ಸ್ವಲ್ಪವಾಗಿ ಕಪ್ಪಾಗಿ…ಕಲ್ಲಿದ್ದಲಾಗಿ , ಕರಕಲಾಗಿ ಪಕ್ಕದ ದಕ್ಷಿಣ ಆಫ್ರಿಕಾಗೆ ಪಾಸ್ಪೋರ್ಟ್ ಇಲ್ಲದೆ ಒಳಗೆ entry ತಗೋ ಬಹುದು ಅಂತ.. J ಹೇಗಿದ್ದರೂ ಅಲ್ಲಿಯ income ಕೂಡ ಹೆಚ್ಚು … J ಅಲ್ಲೇ ಯಾವದಾದರು ಒಂದು ಕರಕಲು ಹುಡುಗಿಯನ್ನ set ಮಾಡಿಕೊಂಡರೆ… ಲೈಫ್ ಸಾರ್ಥಕ.. J ಆದರೆ ಲೈಫ್ ಪೂರ್ತಿ ಅಂಧಕಾರದ ಕಗ್ಗತ್ತಲಲ್ಲಿ ಕೈ ತೊಳೆಯಬೇಕಲ್ಲ ಎಂಬುದೇ ಒಂದು ಯಕ್ಷ ಪ್ರಶ್ನೆಯಾಗಿದೆ …. J ಏನಂತೀರ…???? J

Sunday, July 4, 2010

ಮರಳುಗಾಡಿನ ಪೋರ


ಗುಂಡನ ಕನಸುಗಳು

ಭಾಗ -
ಮರಳುಗಾಡಿನ ಪೋರ

ಗುಂಡ ಓದಿದ . ಓದಿ ಓದಿ ಕೂಚುಬಟ್ಟನಾದ ಎಂಬ ಗಾದೆಯಂತೆ ಓದಿ ಓದಿ PUCಯನ್ನು ಮುಗಿಸಿದ. ಅಪ್ಪನಿಗೆ ಬೇರೆ ಊರಿಗೆ ವರ್ಗವಾಯಿತು . ತನ್ನ ವಿದ್ಯಾರ್ಹತೆ ಬಸ್ ಚಾಲಕನಿಗೆ ಬೆಕಾಗುವುದರಕ್ಕಿಂತ ಹೆಚ್ಚ್ಚಗತೊಡಗಿತ್ತು. ಆದರು ಮನೆಯಲ್ಲಿ ಒತ್ತಾಯದ ಮೇರೆಗೆ ಮುಂದೆ ಓದಲು ಮುಂದಾದ…J ತನ್ನ ಗುರಿ ತನ್ನ ಹಿಂದೆಯೇ ಕಾಲು ಮುರಿದು ಬಿದ್ದಿದರು ಅಸಹಾಯಕನಾಗಿ ನಿಂತ . ತಿಳುವಳಿಕೆ ಬಂದಾಗಲಿನ್ದಳು ಹೊರ ಜಗತ್ತನ್ನು ಅರ್ಥಿಸಿಕೊಂಡಿದ್ದ ಗುಂಡ , ಅವನು ಆಗ ಬಯಸಿದ್ದ ಚಾಲಕನು ಮುಟ್ಟಬಹುದಾದ ಜಗತ್ತಿನಿಗಿಂತ ಹೊರ ಪ್ರಪಂಚ ಇನ್ನು ದೊಡ್ಡದಿದೆ ಎಂಬ ಸತ್ಯವನ್ನ ಮನದಟ್ಟು ಮಾಡಿಕೊಂಡಿದ್ದ . ದೂರದರ್ಶನದಲ್ಲಿ ಬರುವ ಹೊರ ದೇಶದ ಬಗ್ಗೆ ಬರುವ ವಿಷಯಗಳನ್ನ , ಅಲ್ಲಿಯ ಸಂಸ್ಕೃತಿಗಳ ಬಗ್ಗೆ , ಅಲ್ಲಿಯ ಬಾಷೆ , ನಡೆ ನುಡಿಗಳಲ್ಲಿನ ವ್ಯತ್ಯಾಸದ ಬಗ್ಗೆ ಹೆಚ್ಚು ವಲವನ್ನ ತೋರಿಸಿದ. ಆಕಾಶದಲ್ಲಿ ಹಾರುವ ವಿಮಾನಗಳನ್ನು ನೋಡಿದ . ಪಾಶ್ಚಾತ್ಯ ಸಂಗೀತ , ಚಲನಚಿತ್ರಗಳ ಬಗ್ಗೆ ಗುಂಡನ ಮನಸ್ಸು ಎಳೆಯಿತು . ಮನೆಯಲ್ಲಿ ಪಾಶ್ಚಾತ್ಯ ಸಂಗೀತದ ಅಬ್ಬರ ಜಾಸ್ತಿಯಾಯಿತು . ಜೋರಾಗಿ music system ವದರಿಸಿ ಅಕ್ಕ ಪಕ್ಕದವರ ಪಿತ್ತ ನೆತ್ತಿಗೆರಲು ಬೇಕಾದ ಎಲ್ಲ ಪ್ರಯತ್ನವನ್ನು ಗುಂಡ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ …J ಇನ್ನು ಸಮಯ ಬಂದೆ ಬಿಟ್ಟಿತು . ಗುಂಡ ಮನೆ ಬಿಟ್ಟು ಹೋಗುವ ಹೃದಯ ಕಿವುಚುವ ಸಮಯ. ಅಪ್ಪ ಅಮ್ಮನ ಮುದ್ದಿನ ಮಗನಾಗಿ, ಅಕ್ಕ ಪಕ್ಕದವರ ಕೆಂಗಣ್ಣಿಗೆ ಗುರಿಯಾಗಿದ್ದ ಗುಂಡ ಇನ್ನು ಮುಂದೆ ದೂರದ ಊರಿನಲ್ಲಿ Engineering ವ್ಯಾಸಂಗಕ್ಕಾಗಿ ಮನೆಯನ್ನು ತ್ಯಗಿಸಬೇಕಾಯಿತು . ಬಸ್ ಹತ್ತುವ ಮುನ್ನ ಗುಂಡನ ಕಣ್ಣು ಕೆಂಪಾಗಿತ್ತು . ತುಟಿಯು ತನ್ನ ಸಹಜ ಆಕಾರಕ್ಕಿಂತ ಸ್ವಲ್ಪ ಮುಂದೆ ತಳ್ಳಲ್ಪಟ್ಟಿತ್ತು .ಅಪ್ಪ ಅಮ್ಮನಿಗೆ ಟಾಟಾ ಮಾಡಿ ಸಾಮಾನನ್ನು ಮೇಲೇರಿಸಿ ದೂರದ ನಗರಕ್ಕೆ ಹೊರಟೇಬಿಟ್ಟ . ಗುಂಡನ ಮನೆ ಜೋರು ಮಳೆ ಬಂದು ಒಮ್ಮೆಲೇ ನಿಂತ ಭಾಸವಾಯಿತು. ಅಪ್ಪ ಅಮ್ಮ ಒಬ್ಬರನ್ನೊಬ್ಬರು ಮುಖ ಮುಖ ನೋಡುವುದನ್ನು ಬಿಟ್ಟು ಬೇರೆ ಕೆಲಸ ಇಲ್ಲದಂತಾಯಿತು . ಆದರು ಗುಂಡ ತಿನ್ಗಲಿಗೊಮ್ಮೆಯಾದರು ಮಾಸ ಪತ್ರಿಕೆಯಂತೆ ಮನೆಗೆ ಹಾಜರಾಗುತ್ತಿದ್ದ …J ಅಪ್ಪ ಅಮ್ಮ ಎಂದರೆ ಅವನಿಗೂ ಅಸೆ ಅಕ್ಕರೆ ಇತ್ತು . ಇಲ್ಲಿ ದೊಡ್ಡ speakersಗಳನ್ನ ಮನೆಯಲ್ಲಿ ಅದವಲಿಸಿದ್ದ .ಸಂಗೀತದ ಶೇಖರಣೆ ಜಾಸ್ತಿಯಾಗಿತ್ತು . ಎಲ್ಲ ವಸತಿ ನಿಲಯದ ಪ್ರಭಾವ . Cdಗಳಲ್ಲಿ ಸಾವಿರಾರು ಹಾಡುಗಳನ್ನು ಲೇಪಿಸಿಕೊಂಡು ಮನೆಯಲ್ಲಿ ಅದರ ಪ್ರಯೋಗ ಮಾಡುತ್ತಿದ್ದ . ಗುಂಡ ಬಸ್ ಇಳಿದು ಮನೆಗೆ ಸದ್ದಿಲ್ಲದೇ ಬರುತ್ತಿದ್ದ . ಆದರೆ ಅವನು ಇಡುವ high pitch volumeಗೆ ಮನೆಯೇ ನಡುಗುತ್ತಿತ್ತು …J ಅಕ್ಕ ಪಕ್ಕದವರು ಇವನ ಹಾಡಿನ ಶಬ್ದ ಕೇಳೆ ಅರ್ಥೈಸಿಕೊಂಡು ಬಿಡುತ್ತಿದ್ದರು ….ಗುಂಡ ಮನೆಗೆ ಹಾಜರಾಗಿದ್ದಾನೆ ಎಂದು …J ಅಸ್ತ್ರ ಮಟ್ಟಿಗಿತ್ತು ಇವನ ಹಾವಳಿ . ಮನೆಯಲ್ಲೂ ಏನು ಹೇಳಿದರು ಕೇಳೋ ಪರಿಸ್ತಿತಿಯಲ್ಲಿ ಗುಂಡ ಇರಲಿಲ್ಲ . ಯಾಕೆಂದರೆಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ??? ಎಂಬ ಶಾಲೆ ದಿನಗಳಲ್ಲಿ ಎಲ್ಲರ ಮುಂದೆ ಪ್ರಾರ್ಥನೆಯಲ್ಲಿ ಹೇಳುತಿತ್ತ ಗಾದೆ ಮಾತು ಗುಂಡ ಅಕ್ಷರವು ತಪ್ಪದೆ ನೆನೆಪಿತ್ತುಕೊಂಡಿದ್ದ ..!!! J ಈಗಲೂ ಕೂಡ ಅವನ high pitch ಮ್ಯೂಸಿಕ್ ಇಂದಲೇ ಗುಂಡನು ಚಿರಪರಿಚಿತ . Hmmm ವರ್ಷಗಳು ಒರಳಿತು . ಗುಂಡನಿಗೆ ಆದಾವದೋ ಪುಣ್ಯಾತ್ಮ ಕಾಲೇಜಿನಲ್ಲಿನ ಕ್ಯಾಮ್ಪುಸ್ ಇಂಟರ್ವ್ಯೂ ನಲ್ಲಿ ಕೆಲಸ ಕೊಟ್ಟ . ಅದು ದೂರದ ದೆಹಲಿಯಲ್ಲಿ .ಗುಂಡನ ಮುಖ ಸಣ್ಣಗಾಯಿತು … L ಗುಂಡ ಬುಸಲ್ಲಿ ದೂರ ದೂರದ ಪ್ರದೇಶಕ್ಕೆ ಹೋಗಲು ಇಷ್ಟಪಡುತ್ತಿದ್ದ . ಆದರೆ ಇಸ್ಟೊಂದು ದೂರವೂ ಅಲ್ಲ . ಯಾಕೆಂದರೆ ಅವನಿಗೆ ತಿಂಗಳಿಗೊಮ್ಮೆ ಮತ್ತೆ ಮನೆಗೆ ಬರಲು ಕಷ್ಟಸಾಧ್ಯವಾಗುತ್ತಿತ್ತು. ತಿಂಗಳು ಅದು ಹೇಗೋ ಕೆಲಸ ಮಾಡಿದ . ತನ್ನ ಕಂಪನಿಯಲ್ಲೇ ತನ್ನ ಊರಿಗೆ ಹತ್ತಿರದಲ್ಲಿನ ಊರಿಗೆ ವರ್ಗಾಯಿಸಿಕೊಂಡ . ಮತ್ತೆ ಮನೆಯಲ್ಲಿ ಮಳೆಗಾಲ ಶುರುವಾಯಿತು . ಗುಂಡ ೧೫ ದಿನಗಳಿಗೂ ಮನೆಗೆ ಬರಲು ಆರಂಬಿಸಿದ . ಅದೊಂದು ದಿನ ಎಲ್ಲೋ ಮಿರ್ಚಿ ಬಜಿ ಮಾಡುತ್ತಿರುವುದನ್ನ ನೋಡಿದ . ತಕ್ಷಣ ತಡ ಮಾಡದೆ ಮನೆ ಹೋಗೋ ನಿರ್ಧಾರ ಮಾಡಿಯೇಬಿಟ್ಟ . ೪೦೦ ಚಿಲ್ಲರೆ ಕಿಲೋ ಮೀಟರನ್ನ ಕಿಲೋ ಮೀಟೆರಿನಂತೆ ಪರಿಗಣಿಸುತ್ತಿದ್ದ …J ಬೆಳಗಿನಜಾವ ಘಂಟೆಗೆಲ್ಲ ಬಂದು ಮನೆಗೆ ಮುಟ್ಟಿದ . ಇಂಥ ಹುಚ್ಚು ಗುಂಡನಿಗೆ ಮನೆ ಅಂದರೆ . ಎಲ್ಲರು ವೀಕೆಂಡ್ಗೆ ಮಾಲ್ , ಸಿನಿಮಾ , ಶಾಪಿಂಗ್ ಅಂತ ತಿರುಗಾಡಿದರೆ ಇವನದು ಇದೆಲ್ಲದರ ವಿಭಿನ್ನ ಅಭಿರುಚಿ . ಗುಂಡ ಪ್ರತಿ - ವಾರಕ್ಕೊಮ್ಮೆ ಮನೆಗೆ ಓಡುತ್ತಿದ್ದ …J ಇಂಥ ಗುಂಡಕನಸಿನಲ್ಲೂ ಅಂದುಕೊಂಡಿರಲಿಲ್ಲಅದೊಂದು ದಿನ ಇವನು ಚಿಕ್ಕಂದಿಲಿಂದ ನೋಡುತ್ತಿದ್ದ ವಿಮಾನವನ್ನ ಏರಿ ದೂರದ ಮರಳುಗಾಡಿಗೆ ತನ್ನ ೬೫ ಕೆಜಿ ತೂಕದ ಶರೀರದ ಭಾವಚಿತ್ರವನ್ನ orkutನಲ್ಲಿ ಸೇರಿಸುವನೆಂದು . ಅರ್ಥ ಇಸ್ಟೇಗುಂಡನಿಗೆ ಮರಳುಗಾಡಿನಲ್ಲಿ ದುಡಿಯುವ ಅವಕಾಶವಂದು ವದಗಿ ಬಂದಿತ್ತು . ಮನೆಯನ್ನು ವರ್ಷ ಬಿಟ್ಟಿರುವ ದೊಡ್ಡ ಸವಾಲು ಬಂದೊದಗಿತ್ತು . ಮನಸ್ಸನ್ನ ಗಂಟು ಕಟ್ಟಿ ಮನೆಯಲ್ಲೇ ಇಟ್ಟು ವಿಮಾನ ಏರಿದ . ಅಪ್ಪ ಅಮ್ಮ ವಿಮಾನ ನಿಲ್ದಾಣದ ತನಕ ಗುಂಡನ ಜೊತೆಯಾದರು . ಮೊದಲ ಭಾರಿ ವಿಮಾನ ಏರುವ ಸಂಭ್ರಮ ಒಂದೆಡೆ ಆದರೆ ಅಪ್ಪ ಅಮ್ಮನ್ನನ್ನು ಬಿಟ್ಟು ವರ್ಷಗಟ್ಟಲೆ ಇರಬೇಕಲ್ಲ ಎಂಬ ದುಃಖ ಇನ್ನೊಂದೆಡೆ . ಮರಳುಗಾಡಿಗೆ ಬಂದಿಳಿದ . ಮೊದಲ - ತಿಂಗಳು ಅಲ್ಲಿಯ ಜನ ಜೀವನವನ್ನ ನೋಡಿದ . ಕಂಡು ಕಂಡಲ್ಲೆಲ್ಲ ಭಾವಚಿತ್ರವನ್ನ ಕಿಚ್ಚಾಯಿಸಿದ . ಲೈಟು ಕಂಬ , ರೌಂಡ್ ಅಬೌಟ್ ,ರೋಡು , ಮರಳು ಎಲ್ಲೂ ಬಿಡಲಿಲ್ಲ . ಅಪ್ಪ ಅಮ್ಮನನ್ನ ಅಂತರ್ಜಾಲದ ಮೂಲಕ ಭೇಟಿಯಾಗುತಿದ್ದ . ಮಾಸಗಳು ಉರುಳಿತು .ತಾನು ಏನು ಮಾಡುತ್ತಿದ್ದೇನೆ ಎಂದು ಯೋಚಿಸಿದ . ಗುಂಡನಿಗೆ ಇಲ್ಲಿ ತನ್ನ ಬಗ್ಗೆ ವಿಮರ್ಶಿಸಲು ತುಂಬಾ ಸಮಯ ಹಾಗು ಏಕಾಗ್ರತೆ ಒದಗಿ ಬಂದಿತ್ತು . ಕೊಂಚ ಕಾಂಚಾಣದ ಮೇರೆಗೆ ಬೆಲೆ ಕಟ್ಟಲಾಗದೊಂದನ್ನು ಕಳದುಕೊಂಡ ಭಾಸವಾಯಿತು . ಅಪ್ಪ ಅಮ್ಮನನ್ನು ಅಂತರ್ಜಾಲದ ಕಿಂಡಿಯಲ್ಲಿ ನೋಡಲು ಅದೇನೋ ಒಳಗಿಂದೊಳಗೆ ಅದಾವುದೂ ನೋವು ಅನುಭವಿಸಲಾರಂಭಿಸಿದ . ತಾನು ನಿಜವಾಗಳು ತನ್ನ ಪಾಲಕರಿಗೆ ಎಲ್ಲೂ ನೋವನ್ನುಂಟು ಮಾಡುತ್ತಿದ್ದೇನೆ ಎಂಬ ಸಾತ್ಯವನ್ನ ಅರಿತುಕೊಂಡ . ಗುಂಡ ನಿರ್ಧಾರ ಮಾಡಿದ ….ಮನುಷ್ಯ pre-programmed device ಅಲ್ಲ . ಅವನಿಗೆ ಅವನದೇ ಆದ ಅಸ್ತಿತ್ವ ಇದೆ . ಅವನಿಗೆ ಅವನದೇ ಆದ ಭಾವನೆಗಲಿದೆ . ಅವನನ್ನು ನಂಬಿರುವವರು ಅವನ ಸುತ್ತುಮುತ್ತಲ್ಲಲ್ಲಿ ಇದ್ದಾರೆದುಡ್ದೊಂದೇ ಜೀವನ ಅಲ್ಲ ಎಂಬ ಸತ್ಯವನ್ನ ಮನಗಂಡ . ಗುಂಡನಿಗೆ 'Love Aaj Kal '' ಚಿತ್ರದ ತುಣುಕುಗಳು ಕಣ್ಣ ಮುಂದೆ ಬರಲಾರಂಬಿಸಿದವು. ಆದರೆ ಜಗತ್ತು ಸತ್ಯವನ್ನ ಇನ್ನು ಅರಿತಿಲ್ಲವನ್ನ ಎಂಬ ಕಸಿವಿಸಿ ಮನದಲ್ಲೆಲ್ಲೂ ಒಂದು ಕಡೆ ಕೊರಿಯುತಿತ್ತು . ಗುಂಡ ವರ್ಷಾಂತ್ಯಕ್ಕೆ ಮನೆಗೆ ಹೋಗಲು ನಿರ್ಧರಿಸಿದ ….ಮರಳಲ್ಲಿ ವರುಷ ಮರಗಾಡಿನ ಪೂರನಾಗಿ ಮೆರೆದ . ಆದರೆ ಈಗ ಸಮಯ ಬಂದಂತೆ ಕಾಣುತ್ತದೆ . ಅವನ ನಿರ್ಧಾರಕ್ಕೆ ನಿಮ್ಮ ಅನಿಸಿಕೆಯನ್ನು ಉಲ್ಲೇಖಿಸುವುದಕ್ಕೆ ಎಂದಿಗೂ ಸ್ವಾಗತವನ್ನ ಬಯಸುತ್ತ ಕನಸಿನ ಗಂಟನ್ನು ಇಲ್ಲೇ ಕಟ್ಟಿ ಇದುತ್ತಿದೇನೆಧನ್ಯವಾದಗಳು J